ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು
1. ನಮ್ಮ ಪಾಪವನ್ನು ಗುರುತಿಸಿ ಕ್ಷಮೆ ಹುಡುಕುವುದು.
ಮೀನು ಸಮುದ್ರದ ಆಳಕ್ಕೆ ಇಳಿದಾಗ ಪ್ರವಾದಿ ಯೂನಸ್ ತನ್ನ ತಪ್ಪನ್ನು ಅರಿತುಕೊಂಡು ಹಣೆಯ ಮೇಲೆ ನಮಸ್ಕರಿಸಿ ದೇವರಿಗೆ ಕ್ಷಮೆಯಾಚಿಸಿದರು.
2. ಈಶ್ವರ ದಯೆಯಿಂದ ನಿರಾಶೆಗೊಳ್ಳಬೇಡಿ.
ಅವರ ದೌರ್ಭಾಗ್ಯದ ಬಗ್ಗೆ ಅವರು ದುಃಖಿಸಲಿಲ್ಲ ಮತ್ತು ಜೀವನವನ್ನು ಬಿಟ್ಟುಕೊಡಲಿಲ್ಲ.
ಬದಲಿಗೆ,ಅವರು ದೇವರ ಕಡೆಗೆ ಕೈ ಎತ್ತಿದರು.
"ಆಗ ನಾವು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದೆವು ಮತ್ತು ಅವರನ್ನು ದುಃಖದಿಂದ ರುಗಾಣಿಸಿದೆವು. ಇದೇ ರೀತಿ ನಾವು ಸತ್ಯವಿಶ್ವಾಸಿಗಳನ್ನು ರಕ್ಷಿಸಿಕೊಳ್ಳುತ್ತೇವೆ".
(ಕುರಾನ್ 21:88)
3. ದಾವಾಹ ಕಾರ್ಯದಲ್ಲಿ ತಾಳ್ಮೆಯ ಮಹತ್ವ.
ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯಲು ತಡವಾಗಬಹುದು,ನೀವು ವರ್ಷಗಳಿಂದ ಜನರನ್ನು
ತಿಳಿಸುತ್ತಿರಬಹುದು, ನಿಮ್ಮ ಹತ್ತಿರವಿರುವ ಜನರು ನಿಮ್ಮ ಸ್ನೇಹಿತರು ಅಥವಾ ಕುಟುಂಬದವರು ಸತ್ಯವನ್ನು ಒಪ್ಪಿಕೊಳ್ಳದಿರಬಹುದು, ಆದರೆ ನೀವು ನಿರುತ್ಸಾಹಗೊಂಡು ತಮ್ಮ ಪ್ರಯತ್ನ ನಿಲ್ಲಿಸಬೇಕೆಂದರ್ಥವಲ್ಲ.
4. ಧಿಕ್ರ್ [ದೇವರ ಸ್ಮರಣೆ] ಮತ್ತು ದುವಾ [ದೇವರ ಸಹಾಯ ಕೋರಿ] ಇವು ಶಕ್ತಿಯುತ ಸಾಧನಗಳು.
ಪ್ರವಾದಿ ಯೂನುಸ್ ಸಮುದ್ರದ ತಳದಲ್ಲಿಯೂ ಸಹ ಜೀವಿಗಳು ದೇವರನ್ನು ಸ್ತುತಿಸುತ್ತಿದ್ದಾರೆಂದು ಅರಿತುಕೊಂಡರು.
ಇದು ದುವಾ ಮತ್ತು ಧಿಕ್ರ್ ಪ್ರಾಮುಖ್ಯತೆಯ ಬಗ್ಗೆ ಜ್ಞಾಪನೆಯಾಗಿದೆ.
ನೀವು ದೇವರ ಆಜ್ಞೆಗಳನ್ನು ಧಿಕ್ಕರಿಸಿ ಎಷ್ಟೇ ದೂರ ಹೋಗಿರಲಿ,ಆದರೆ ನಿಜವಾದ ಪಶ್ಚಾತ್ತಾಪ ಮತ್ತು ತಪಸ್ಸು ನಿಮ್ಮನ್ನು ದೈವಿಕ ಅನುಗ್ರಹಕ್ಕೆ ಅರ್ಹರನ್ನಾಗಿ ಮಾಡುತ್ತದೆ. ಮತ್ತು ಅವನು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ ಮತ್ತು ನಿಮ್ಮನ್ನು ವಿಲಕ್ಷಣಗಳಿಂದ ತೆಗೆದುಹಾಕುತ್ತಾನೆ.
No comments:
Post a Comment