Thursday, 21 May 2020

ಸನಾತನ ಧರ್ಮ ಮತ್ತು ಹಲಾಲ್ ಆಹಾರವನ್ನು ತಿನ್ನುವ ಆಜ್ಞೆ

ಸನಾತನ ಧರ್ಮದಲ್ಲಿ ಹಲಾಲ್ ಆಹಾರ

ಖುರ್ಷಿದ್ ಇಮಾಮ್
*******************************

ಅರೇಬಿಕ್ ಪದ 'ಹಲಾಲ್' ಎಂದರೆ ಅನುಮತಿಸಲಾದ.

ಕುರಾನ್ ಈ ಪದವನ್ನು ಭಿನ್ನ ಸನ್ನಿವೇಶಗಳಲ್ಲಿ ಬಳಸುತ್ತದೆ. ಅಂತಹ ಒಂದು ಸಂದರ್ಭವೆಂದರೆ: ಆಹಾರ.

ದೇವರು ಇಡೀ ವಿಶ್ವವನ್ನು ಮಾನವಕುಲದ ಹಿತಕ್ಕಾಗಿ ಸೃಷ್ಟಿಸಿದ್ದಾನೆ. ಪ್ರಾಣಿ ಮತ್ತು ಸಸ್ಯ ಸಂಕುಲವು ಸಹ ನಮ್ಮ ಸೇವೆಯಲ್ಲಿದೆ. ಕೆಲವು ಪ್ರಾಣಿಗಳನ್ನು  ಆಹಾರವನ್ನಾಗಿ ತಿನ್ನಲು ದೇವರಿಂದ ಅನುಮತಿ ದೊರೆತಿದೆ. ಆಹಾರವನ್ನು ತಿನ್ನುವ ಈ ಅನುಮತಿ ಇಸ್ಲಾಮಿಕ್ ಮತ್ತು ಹಿಂದೂ ಧಾರ್ಮಿಕ ಗ್ರಂಥಗಳೆರಡರಲ್ಲೂ ಇದೆ.

 ಹಿಂಸಾತ್ಮಕವಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ. ಆದರೆ ಆಹಾರವಾಗಿ ಸೇವಿಸಲು, ದೇವರ ಅನುಮತಿ ಇದೆ. ಆದ್ದರಿಂದ, ಈ ಪ್ರಾಣಿಗಳನ್ನು ವಧಿಸುವಾಗ ನಾವು ದೇವರ ಹೆಸರನ್ನು ತೆಗೆದುಕೊಳ್ಳುತ್ತೇವೆ. ಇಲ್ಲದಿದ್ದರೆ ಜೀವವನ್ನು ತೆಗೆಯುವುದು ನಮ್ಮ ಕೈಯಲ್ಲಿದೆ ಎಂದು ನಾವು ಭಾವಿಸುತ್ತೇವೆ.

ಜೀವವನ್ನು ತೆಗೆಯುವುದು ಖಂಡಿತವಾಗಿಯೂ ತಪ್ಪಾಗಿದ್ದರೂ, ದೇವರ ಅನುಮತಿಯಿಂದ ಅದನ್ನು ಕೇವಲ ಆಹಾರ ರೂಪದಲ್ಲಿ ಸೇವಿಸುವ ಉದ್ದೇಶದಿಂದ ನಾವು ಈ ಜೀವವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು  ನೆನಪಿಸಿಕೊಳ್ಳುತ್ತೇವೆ. ನಿಜಕ್ಕೂ ದೇವರು ಎಲ್ಲಾ ಜೀವಿಗಳ ಮೇಲೆ ಶಕ್ತಿಯುಳ್ಳವನಾಗಿದ್ದು ,ಈ ಪ್ರಾಣಿಗಳ ಮೇಲೆ ನಮಗೇನೂ ಅಧಿಕಾರವಿಲ್ಲ. ಈ "ಅವಕಾಶ"ಅಥವಾ ಅನುಮತಿಸುವಿಕೆಯನ್ನೇ ಅರೇಬಿಕ್ ಭಾಷೆಯಲ್ಲಿ ಹಲಾಲ್ ಎಂದು ಕರೆಯಲಾಗುತ್ತದೆ.

ನೀವು ಹಿಂದೂ ಧರ್ಮಗ್ರಂಥಗಳನ್ನು ಓದಿದರೆ, ಹಲವಾರು ಸ್ಥಳಗಳಲ್ಲಿ ಮಾಂಸವನ್ನು ತಿನ್ನುವ ಆಜ್ಞೆ ಇದೆ.

ಶ್ರೀ ರಾಮಚಂದ್ರರು ಕೂಡ ಮಾಂಸ ತಿನ್ನುತ್ತಿದ್ದರು.

 ಭಾರತೀಯ ಶ್ರೇಷ್ಠ ವ್ಯಕ್ತಿ- ಸ್ವಾಮಿ ವಿವೇಕಾನಂದರು- ಹಿಂದೂ ಸಹೋದರರಿಗೆ ಮಾಂಸ ತಿನ್ನುವ ಅಗತ್ಯವನ್ನು ಒತ್ತಿ ಹೇಳಿದರು.

"ಹಳೆಯ ವಿಧ್ಯುಕ್ತಗಳ ಪ್ರಕಾರ,  ಗೋಮಾಂಸವನ್ನು ತಿನ್ನದವನು ಉತ್ತಮ ಹಿಂದೂ ಅಲ್ಲ ಎಂದು ನಾನು ನಿಮಗೆ ಹೇಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಕೆಲವು ಸಂದರ್ಭಗಳಲ್ಲಿ ಓರ್ವನು ಗೂಳಿಯನ್ನು ಬಲಿ ಕೊಟ್ಟು ತಿನ್ನಬೇಕು."
[ಸ್ವಾಮಿ ವಿವೇಕಾನಂದರ ಸಂಪೂರ್ಣ ಕೃತಿಗಳು, ಸಂಪುಟ 3, ಪುಟ 536]

"ನಮ್ಮ ಭಾರತದಲ್ಲೇ ಒಂದು ಸಮಯವಿತ್ತು ಗೋಮಾಂಸವನ್ನು ತಿನ್ನದೇ, ಯಾವ ಬ್ರಾಹ್ಮಣನು ಬ್ರಾಹ್ಮಣನಾಗಿ ಉಳಿಯಲು ಸಾಧ್ಯವಿರಲಿಲ್ಲ;" [ಪುಟ 174]

ಇವು ಪ್ರಸಿದ್ಧ ವಿಷಯಗಳು. ಆಶ್ಚರ್ಯಕರ ಸಂಗತಿಯೆಂದರೆ, ಸನಾತನ ಧರ್ಮವು ಸಹ ಹಲಾಲ್ ಆಹಾರವನ್ನು ತಿನ್ನಲು ಆಜ್ಞಾಪಿಸುತ್ತದೆ.  ನಿಗದಿತ ವಿಧಾನವನ್ನು ಅನುಸರಿಸದೇ ಮಾಂಸ ತಿನ್ನುವುದನ್ನು ಹಿಂದೂ ಧರ್ಮದಲ್ಲಿ ನಿಷೇಧಿಸಲಾಗಿದೆ.

ಹಿಂದೂ ಧರ್ಮಗ್ರಂಥದಲ್ಲಿ ಪ್ರಾಣಿ ವಧೆಗಾಗಿ ಎರಡು ಷರತ್ತುಗಳನ್ನು ಹಾಕಲಾಯಿತು.
1. ದೇವರ  ಅನುಮತಿಯೊಂದಿಗೆ ವಧೆ ಮಾಡಲಾಗುತ್ತಿದೆ ಎಂಬುದನ್ನು ನೆನಪಿನಲ್ಲಿಡುವ ಸಲುವಾಗಿ  ವಧೆಯ ಸಮಯದಲ್ಲಿ ದೇವರ ಹೆಸರನ್ನು ತೆಗೆದುಕೊಳ್ಳಬೇಕು
2. ದೇವರು ಕೊಟ್ಟ ವಿಧಾನವನ್ನು ಅನುಸರಿಸಬೇಕು. ಇಲ್ಲದಿದ್ದರೆ, ಇದನ್ನು ಕೊಲೆ ಎಂದು ಪರಿಗಣಿಸಲಾಗುವುದು.

ಮಂತ್ರಗಳನ್ನು ಪಠಿಸುವುದರಿಂದ ಮಾಂಸವನ್ನು ಪವಿತ್ರ ಅಥವಾ ಶುದ್ಧಗೊಳಿಸಲಾಗುತ್ತದೆ.




ಮನುಸ್ಮೃತಿಯ ಈ  ಮೇಲಿನ ಪದ್ಯಗಳು ಪ್ರಾಣಿಗಳನ್ನು ದೈವಿಕ ಕಾನೂನಿನ ಪ್ರಕಾರ ವಧಿಸುವ ಮತ್ತು ದೈವಿಕ ಮಂತ್ರವನ್ನು ಪಠಿಸುವ ಬಗ್ಗೆ ಸ್ಪಷ್ಟನೆ ನೀಡುತ್ತವೆ.

ನಮ್ಮನ್ನು ಮತ್ತು ಪ್ರಾಣಿಗಳನ್ನು ಸೃಷ್ಟಿಸಿದ ದೇವರು,ಅವುಗಳಲ್ಲಿ ಕೆಲವನ್ನು ನಮ್ಮ ಆಹಾರವಾಗಿ ಬಳಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾನೆ.

ಸಜೀವಿಗಳನ್ನು ಸೇವಿಸದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯ - ಸಸ್ಯಾಹಾರಿ ಅಥವಾ  ಮಾಂಸಾಹಾರಿ ಆಗಲಿ - ಇತರ ಜೀವಿಗಳನ್ನು ತಿನ್ನುವುದರ ಮೂಲಕವೇ ಬದುಕುಳಿಯುತ್ತಾನೆ.

English Source: https://khurshidimam.blogspot.com/2020/05/halal-food-in-sanatan-dharm.html

Friday, 10 April 2020

ಹಿಂದೂ ಸಹೋದರನ ಪ್ರಶ್ನೆ

ಪ್ರಶ್ನೆ: ಮಹಮ್ಮದ್ ಅಲ್ಲಾಹನ ಪ್ರವಾದಿಗಳು.  ಅವರ ಒಡನಾಡಿಗಳು ಅವಿಶ್ವಾಸಿಗಳ ವಿರುದ್ಧ ಕಠಿಣರೂ,  ಒಬ್ಬರಿಗೊಬ್ಬರು ಕರುಣಾಮಯಿಗಳೂ ಆಗಿದ್ದಾರೆ...”(ಖುರಾನ್ 48:29)

ಖುರಾನಿನ ಈ ಸೂಕ್ತದ ಸನ್ನಿವೇಶವಾದರು ಏನು  [ಇದು ದ್ವೇಷವನ್ನು ಹರಡುತ್ತಿದೆಯೇ?] -ಈ ಕುರಿತು ಹಿಂದೂ ಸಹೋದರನು ತಿಳಿಯಲು ಬಯಸುತ್ತಾನೆ.

* ಒಂದು ಸಾಲಿನ ಉತ್ತರವೆಂದರೆ *: - ಪ್ರವಾದಿ ಹಾಗೂ ಅವರ ಅನುಯಾಯಿಗಳು ತಮ್ಮನ್ನು ಭಯಭೀತಿಗೊಳಿಸಿ ತಾಯ್ನಾಡಿನಿಂದ ಹೊರದೂಡಿದವರ ವಿರುದ್ಧ ಧೃಡ/ಕಠಿಣವಾಗಿರುವುದರ ಬಗ್ಗೆ  ಈ ಸೂಕ್ತ ತಿಳಿಸುತ್ತದೆ.

* ವಿವರಾತ್ಮಕ ಉತ್ತರಕ್ಕಾಗಿ, ದಯವಿಟ್ಟು ಕೆಳಗೆ ಓದಿ *

 ಕೆಲವು ಹೇಳಿಕೆಗಳನ್ನು ಸಂದರ್ಭ/ಸನ್ನಿವೇಶಕ್ಕೆ ಅನುಗುಣವಾಗಿ ಪ್ರಸ್ತುತಪಡಿಸದೆ ಋಣಾತ್ಮಕ ಚಿತ್ರಣವನ್ನು ಬಿಂಬಿಸುವ ಅಂಶವನ್ನು ಕೆಳಗೆ  ವಿವರಿಸಲಾಗಿದೆ.

ಉದಾಹರಣೆಗೆ: ಕರೋನಾ-ವೈರಸ್ ನ ಈ ಸಮಯದಲ್ಲಿ, ಮಿಸ್ಟರ್ 'X' ಮಿಸ್ಟರ್ 'Y' ಗೆ ಹೇಳಿದ, "ನೀವು ಹೊರಗೆ ಹೋಗುವುದನ್ನು ತಪ್ಪಿಸಿ,ನೀವು ಭೇಟಿಯಾಗುವ  ಪ್ರತಿಯೊಬ್ಬರಿಂದ 1 ಮೀಟರ್ ದೂರ ಕಾಯ್ದುಕೊಳ್ಳಿ ಮತ್ತು ಯಾರೊಂದಿಗೂ ಕೈಕುಲುಕಬೇಡಿ".

ಮಿಸ್ಟರ್‌ X ನ ಈ ಮಾತುಗಳು ನನಗೆ ಅರ್ಥವಾಗುತ್ತವೆ, ಏಕೆಂದರೆ ಕರೋನಾ-ವೈರಸ್ ಮಾರಿ ಹರಡುತ್ತಿರುವ ಅರಿವು ನನಗಿದೆ.ಇದು ಜೀವಕ್ಕೆ ಅಪಾಯಕಾರಿ.ಹೀಗಿರುವಾಗ ಜನರೊಂದಿಗಿನ ನಿಕಟ ಸಂಪರ್ಕಕವು ಕರೋನ-ವೈರಸ್ ಸೋಂಕು ಹಾಗೂ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.

ಆದರೆ, ಯಾರಾದರೂ ಈ ಸಂದರ್ಭವನ್ನು ನಿರ್ಲಕ್ಷಿಸಿ - "ಮಿಸ್ಟರ್ X  ದ್ವೇಷ ಮತ್ತು ಕ್ರೌರ್ಯವನ್ನು ಹರಡುತ್ತಿದ್ದಾರೆ. ಜನರನ್ನು ಬಹಿಷ್ಕರಿಸುವಂತೆ, ಕೈಕುಲುಕದಂತೆ ಅವರು ಮಿಸ್ಟರ್ Yಗೆ  ಸಲಹೆ ನೀಡುತ್ತಿದ್ದಾರೆ " ಎಂದು ವಾದಿಸುವುದಾದರೆ, ಆ ವ್ಯಕ್ತಿ ಮಿಸ್ಟರ್ Xನ ಅಪಪ್ರಚಾರ ಮಾಡಿ ಋಣಾತ್ಮಕ ಚಿತ್ರಣವನ್ನು ಹರಡುತ್ತಿದ್ದಾನೆ ಎಂದಾಯಿತು. ಮಿಸ್ಟರ್ X ಅವರು ಮಿಸ್ಟರ್  Yಗೆ ಈ ಸಲಹೆಯನ್ನು ನೀಡಿದ ಆ ಸಂದರ್ಭವನ್ನು ಈ ವ್ಯಕ್ತಿ ನಿರ್ಲಕ್ಷಿಸುತ್ತಿದ್ದಾನೆ. ಈ ಸಲಹೆ-ಸೂಚನೆಗಳು ಪರಿಸ್ಥಿತಿಗೆ ಅನುಗುಣವಾದುದೇ ಹೊರತು ಜೀವನದಲ್ಲಿ ಅಳವಡಿಸಬೇಕಾದ ಸಾಮಾನ್ಯ ನಿಯಮವೇನಲ್ಲ.

ಅದೇ ರೀತಿ ಕುರಾನ್ ಪ್ರೀತಿ ಮತ್ತು ಬುದ್ಧಿವಂತಿಕೆಯನ್ನು ಜೀವನದಲ್ಲಿ ಸಾಮಾನ್ಯ ನಿಯಮವನ್ನಾಗಿ ಬಳಸುವಂತೆ ಸಲಹೆ  ನೀಡುತ್ತದೆ. ಆದಾಗ್ಯೂ, ಯುದ್ಧದ ಸಮಯಕ್ಕಾಗಿ ಮತ್ತೊಂದು ರೀತಿಯ ನಿಯಮಾವಳಿಗಳನ್ನು ಪ್ರಸ್ತಾಪಿಸುತ್ತದೆ. ನೀವು ಖುರಾನ್ ಅನ್ನು ಪ್ರಾರಂಭದಿಂದ( ಫತೇಹ್ ಅಧ್ಯಾಯ)  ಓದದ್ದೇ ಆದ್ದಲ್ಲಿ ಸೂಕ್ತಗಳ ಕುರಿತು ಉದ್ಭವವಾಗುವ ಪ್ರಶ್ನೆಗಳಿಗೆ ಸಂಪೂರ್ಣ ಚಿತ್ರಣ ಸಿಗುತ್ತದೆ.

1.ಮೆಕ್ಕಾದ ಜನರು ಮುಸ್ಲಿಮರನ್ನು ತಮ್ಮ ತಾಯ್ನಾಡಿನಿಂದ ಹೊರಹಾಕಿದ್ದರು. ಮುಸ್ಲಿಮರ  ಆಸ್ತಿ-ಪಾಸ್ತಿ, ಹಣ-ಸಂಪತ್ತನ್ನು ಈ ಜನರು ಕಸಿದುಕೊಂಡರು. ಮುಸ್ಲಿಮರನ್ನು ಕೊಲ್ಲುವುದರ ಜೊತೆಗೆ ಅವರನ್ನು ವಲಸಿಗರನ್ನಾಗಿ ಮಾಡಿದರು.

ಮುಸ್ಲಿಮರು ಮೆಕ್ಕಾಗೆ ಹಿಂತಿರುಗಲು ನಿರ್ಧರಿಸಿ ಬಂದಾಗ, ಆ ಪ್ರದೇಶದಲ್ಲಿ ನುಸುಳಲು ಸಹ ಅವರಿಗೆ ಅವಕಾಶ ನೀಡಲಿಲ್ಲ.ಈ ಸಂಧರ್ಭದಲ್ಲಿ ಮೆಕ್ಕನ್ನರ ಮತ್ತು ಮುಸ್ಲಿಮರ ನಡುವೆ ಒಪ್ಪಂದವಾಯಿತು.

2.ಈ ಅಧ್ಯಾಯದ ಸೂಕ್ತಗಳು ಮೇಲೆ ವಿವರಿಸಿದ ಸಂಧರ್ಭದಲ್ಲಿ ಬಹಿರಂಗವಾದವು/ನಿರೂಪಿತವಾದವು.

3.ಬಹುಮುಖ್ಯ ಭಾಗವೆಂದರೆ: * ಮುಸ್ಲಿಮರು ಮೆಕ್ಕನ್ನರಿಗಿಂತ ಬಲಶಾಲಿಗಳಾಗಿದ್ದರೂ, ಅವರು ಶಾಂತಿಗೆ ಅನುವು ನೀಡುವ ಉದ್ದೇಶದಿಂದ ಮೆಕ್ಕನ್ನರೊಂದಿಗೆ ಒಪ್ಪಂದ ಮಾಡಿಕೊಂಡರು *.

22ನೇ ಸೂಕ್ತದಿಂದ ಓದುವುದಾದರೆ

4.ಸೂಕ್ತ 22 ಹೇಳುತ್ತದೆ- "ಮತ್ತು ನಂಬಿಕೆಯಿಲ್ಲದವರು [ಮೆಕ್ಕನ್ನರು] ನಿಮ್ಮೊಂದಿಗೆ ಯುದ್ಧ ನೆಡೆಸುತ್ತಿದ್ದರೆ, ಅವರು ಬೆನ್ನು ತಿರುಗಿಸಿ ಓಡಿಹೋಗುತ್ತಿದರು"

5. 25ನೇ ಸೂಕ್ತವು  ಮೆಕ್ಕಾದ ಜನತೆ ಮುಸ್ಲಿಮರನ್ನು ಹರಮ್ ಮಸೀದಿಗೆ ಹೋಗದಂತೆ ತಡೆದದ್ದನ್ನು ವಿವರಿಸುತ್ತದೆ.

ಖುರಾನ್ ಮುಸ್ಲಿಮರ ವಿರುದ್ಧ ಹೊಡೆದಾಡಿ , ಅವರನ್ನು ನಾಡಿನಿಂದ ನಿಷ್ಕಾಶಗೊಳಿಸಿ, ಅವರ ಮೇಲೆ ಎಲ್ಲಾ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ಬಿಚ್ಚಿಟ್ಟ ನಿರ್ದಿಷ್ಟ ಗುಂಪಿನ ಕುರಿತು ಮಾತನಾಡುತ್ತಿದೆ.  ಮುಸ್ಲಿಮರು  ವರ್ಷಾನುಗಟ್ಟಲೆ ತಾಳ್ಮೆಯಿಂದಿದ್ದು, ತಮ್ಮ ತಾಯ್ನಾಡಿಗೆ ಮರಳಲು ಅದೆಷ್ಟು ಬಯಸಿದ್ದರೂ ಸಹ ಮತ್ತೆ-ಮತ್ತೆ ಈ ಮೆಕ್ಕನ್ನರ ಗುಂಪು ಅವರನ್ನು ತಡೆದು ನಿಲ್ಲಿಸಿತ್ತು*.


ಆ ಮುಸ್ಲಿಮರ ನೋವು ಮತ್ತು ತಾಳ್ಮೆಯನ್ನು ನೀವು ಊಹಿಸಬಲ್ಲಿರಾ?

ಈ ರೀತಿಯ ಜನರ ಕುರಿತಾಗಿ, 29ನೇಯ ಸೂಕ್ತವು  ಪ್ರವಾದಿ ಮತ್ತು ವಿಶ್ವಾಸಿಗಳು ಇಂತಹ ಜನರ ವಿರುದ್ಧ [ ಯುದ್ಧದಲ್ಲಿದ್ದ ಮೆಕ್ಕನ್ನರು]  ದೃಢರಾಗಿದ್ದಾರೆಂದು  ಹೇಳುತ್ತದೆ.

ಇದನ್ನು ಅರಿಯಲು ಕಠಿಣವಿರುವುದಾದರು ಏನು?

ಒಂದು ದೇಶದ ಸೈನ್ಯವು ತಾನು ಹೊರಹಾಕಲ್ಪಟ್ಟ ಭೂಮಿಯನ್ನು  ಮರುಪಡೆಯಲು ಹೋದಾಗ ಮಾಡುವುದಾದರೂ ಏನು?

ಲೇಖನದ ಮೂಲ:
https://khurshidimam.blogspot.com/2020/04/strong-against-kaafir-quran-4829-what.html

ಧರ್ಮಗ್ರಂಥಗಳಲ್ಲಿ ಹಿಂಸೆಯ ಸಂಧರ್ಭ: ತತ್ವಜ್ಞಾನ ಮತ್ತು ಸತ್ಯದ ಪರಿಶೀಲನೆ

ಶುಕ್ರವಾರ, ಏಪ್ರಿಲ್ 25, 2025 ದುಃಖದ ಘಟನೆ ಮತ್ತು ಅಪ್ರಮಾಣಿತ ಆರೋಪ ದುಃಖದ ಘಟನೆ ಮತ್ತು ಅಪ್ರಮಾಣಿತ ಆರೋಪ ಖುರ್ಷೀದ್ ಇಮಾಮ್ ---------------------------------...