Saturday, 27 June 2020

ನಾನು ವಿಜ್ಞಾನವನ್ನು ನಂಬುತ್ತೇನೆ. ನನಗೆ ಧರ್ಮ ಅಥವಾ ದೇವರು ಏಕೆ ಬೇಕು?

ನಾನು ವಿಜ್ಞಾನವನ್ನು ನಂಬುತ್ತೇನೆ. ನನಗೆ ಧರ್ಮ ಅಥವಾ ದೇವರು ಏಕೆ ಬೇಕು? 
***************** ****

ವಿಜ್ಞಾನವು ದೇವರ ನಿಯಮಗಳ ಆವಿಷ್ಕಾರಗಳೊಂದಿಗೆ ವ್ಯವಹರಿಸುತ್ತದೆ. ಅದಕ್ಕೆ ತಕ್ಕಂತೆಯೇ ಪ್ರಕೃತಿಯ ನಿಯಮಗಳು  ಬದಲಾಗುವುದಿಲ್ಲ. ಈ ಕಾನೂನುಗಳ ಬಗ್ಗೆ ನಾವು ಎಷ್ಟು ಆಲೋಚಿಸುವೆವೋ  ಮಾನವಕುಲಕ್ಕೆ ಅಷ್ಟೇ  ಉತ್ತಮ ವಿಷಯಗಳನ್ನು ತರಬಹುದು.

ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನವು ಅಪಾರವಾದ ಸಹಾಯ ಮಾಡುತ್ತದೆ. ನಮ್ಮ ಅಲಾರಾಂ ಗಡಿಯಾರದಿಂದ  ಹಿಡಿದು  ಔಷಧಿಗಳವರೆಗೆ - ಎಲ್ಲವೂ ವಿಜ್ಞಾನದ ವ್ಯಾಪ್ತಿಗೆ ಬರುತ್ತವೆ.

ಆದರೆ, ವಿಜ್ಞಾನವು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಜೀವನದ ಪ್ರತಿಯೊಂದು ವಿಷಯದಲ್ಲೂ ವಿಜ್ಞಾನವು ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ನಿರೀಕ್ಷಿಸುವುದು ಅನ್ಯಾಯವೇ ಸರಿ.

ವಿಜ್ಞಾನದ ಸ್ವರೂಪವು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಉತ್ತಮ ಮನುಷ್ಯನನ್ನಾಗಿ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ವಿಜ್ಞಾನವು ನೈತಿಕ ಮೌಲ್ಯಗಳು, ನೀತಿಶಾಸ್ತ್ರ ಅಥವಾ ಸಾಮಾಜಿಕ ನಡವಳಿಕೆಯ ಬಗ್ಗೆ ಮಾತನಾಡುವುದಿಲ್ಲ. ಇದು ತಮ್ಮ ಪೋಷಕರಿಗೆ ಕೃತಜ್ಞತೆ ತೋರುವ, ತನ್ನ ಸಂಗಾತಿಯನ್ನು ಪ್ರೀತಿಸುವ, ತನ್ನ ಮಕ್ಕಳನ್ನು ಆರೈಕೆ ಮಾಡುವ ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡುವ ಬಗ್ಗೆ ಮಾತನಾಡುವುದಿಲ್ಲ.

ಹಾಗೆಯೇ, ವಿಜ್ಞಾನವು ಓರ್ವನ ಆತ್ಮಸಾಕ್ಷಿಗೆ ಮನವಿ ಮಾಡುವುದಿಲ್ಲ ಮತ್ತು ಇತರರಿಗೆ ಹಾನಿಯಾಗದಂತೆ ತಡೆಯುವುದಿಲ್ಲ.

ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯವು ತಕ್ಕ ಮಾನವ ಸಂಪನ್ಮೂಲ ನೀತಿಯನ್ನು ಹೊಂದಿರಬಹುದು, ಉದಾಹರಣೆಗೆ 'ಲೈಂಗಿಕ ಕಿರುಕುಳ ತಡೆಗಟ್ಟುವಿಕೆ'. ಆದರೆ
 ನೈತಿಕವಾಗಿ ಸರಿಯಾದ ಲೈಂಗಿಕ ನಡವಳಿಕೆ ಏನೆಂದು ವಿಜ್ಞಾನ ನಮಗೆ ಕಲಿಸದು!

ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನವು  ಅತ್ಯಗತ್ಯವಿದ್ದರೂ, ಇದು ನಮ್ಮ ಅಸ್ತಿತ್ವದ ಕುರಿತು ವಿಶಾಲ ದೃಷ್ಟಿಕೋನವನ್ನು ಒಳಗೊಂಡಿರುವುದಿಲ್ಲ:

1. ನಮ್ಮ ಜೀವನದ ಉದ್ದೇಶವೇನು?

2. ಯಾವ ಕಾರ್ಯಗಳು ಪ್ರಯೋಜನಕಾರಿ ಮತ್ತು ಯಾವುದು ಹಾನಿಕಾರಕ?

3. ಬಡತನ, ಮಾದಕ ವ್ಯಸನ, ಅತ್ಯಾಚಾರ, ದರೋಡೆ, ಕೊಲೆ ಇತ್ಯಾದಿಗಳನ್ನು ತೊರೆದುಹಾಕಲು ಯಾವ ಕಾನೂನುಗಳನ್ನು ಜಾರಿಗೆ ತರಬೇಕು?

4. ಜೀವನದಲ್ಲಿ ಮತ್ತು ಸಮಾಜದಲ್ಲಿ 'ಶಾಂತಿ' ಹೇಗೆ ಸಾಧಿಸುವುದು?

ಈ ಸಂಬಂಧಿತ ಪ್ರಶ್ನೆಗಳಿಗೆ ವಿಜ್ಞಾನ ಉತ್ತರಿಸುವುದಿಲ್ಲ.

ಆದ್ದರಿಂದ, ನಮಗೆ ಜ್ಞಾನದ ಅಡಿಪಾಯವಾಗಿ  ವಿಜ್ಞಾನದ ಸ್ವತ್ತಿಗಿಂತ ಮಿಗಿಲಾದ ಒಂದು ಘಟಕದ ಅವಶ್ಯಕತೆ ಇದೆ. ಅದುವೇ 'ಸರ್ವಶಕ್ತ ದೇವರ ಮಾರ್ಗದರ್ಶನ'.

ಮಾನವಕುಲವನ್ನು ಸೃಷ್ಟಿಸಿದ ಆ ಸೃಷ್ಟಿಕರ್ತನಿಂದ ನಮಗೆಲ್ಲರಿಗೂ ಮಾರ್ಗದರ್ಶನ ಬೇಕಿದೆ.   ಇಡೀ ಮಾನವೀಯತೆಗೆ ಒಳ್ಳೆಯದ್ದು- ಕೆಟ್ಟದ್ದಾವುದೆಂದು ಚೆನ್ನಾಗಿ ತಿಳಿದಿರುವವನಿಂದ,  ನಿಷ್ಪಕ್ಷಪಾತ ಮಾರ್ಗದರ್ಶನ ಬೇಕು.

ದೇವರ ಮಾರ್ಗದರ್ಶನವನ್ನು ಅನುಸರಿಸುವುದನ್ನು ದೇವರ ಧರ್ಮ ಎಂದು ಕರೆಯಲಾಗುತ್ತದೆ.

ಮತ್ತು ಈ ಮಾರ್ಗದರ್ಶನವು ದೇವರು ರಚಿಸಿದ ಕಾನೂನುಗಳು ಮತ್ತು ವಿಷಯಗಳ ಬಗ್ಗೆ ವಿಚಾರಮಾಡಲು ಮತ್ತು ಅವುಗಳನ್ನು ತನ್ನ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಬಳಸಲು ಹೇಳುತ್ತದೆ.

Sunday, 21 June 2020

ಸೂರ್ಯ ಮತ್ತು ಚಂದ್ರ ಪ್ರಯೋಜನಕಾರಿಯಾದ ಕಾರಣ ನಾವು ಅವುಗಳನ್ನು ಪೂಜಿಸಬಹುದೇ?

 ಸೂರ್ಯ ಮತ್ತು ಚಂದ್ರ ಪ್ರಯೋಜನಕಾರಿಯಾದ ಕಾರಣ ನಾವು ಅವುಗಳನ್ನು ಪೂಜಿಸಬಹುದೇ?

----------------------------------------

 ಸನ್ನಿವೇಶಕ್ಕೆ ಅನುಗುಣವಾಗಿ ಪ್ರತಿಕ್ರಯಿಸಲು ಭಿನ್ನ ಪದಗಳು ಹಾಗೆಯೇ ವಿಭಿನ್ನ ನಡವಳಿಕೆಗಳಿವೆ.

ಗೌರವ, ಪ್ರೀತಿ, ವಾತ್ಸಲ್ಯ, ಸಲ್ಲಿಕೆ, ಹೊಗಳಿಕೆ, ಮೆಚ್ಚುಗೆ - ಈ ಪದಪುಂಜಗಳು ಸನ್ನಿವೇಶಕ್ಕೆ ತಕ್ಕಂತೆ ಬಳಕೆಯಾಗುವವು.

ನೀವು ಪೋಷಕರನ್ನು ಗೌರವಿಸಿ ಪ್ರೀತಿಸುತ್ತೀರಿ.

ನೀವು ಮೆಚ್ಚುಗೆಯಿಂದ ಕ್ರಿಕೆಟಿಗನ ಆಟ ಅಥವಾ ಓರ್ವನ ಧೈರ್ಯವನ್ನು ಪ್ರಶಂಸಿಸಬಹುದು. ಆದರೆ ಅವರು ನಿಮ್ಮ ಪೋಷಕರನ್ನು ಬದಲಿಸಲು ಸಾಧ್ಯವಿಲ್ಲ. ನಿಮ್ಮ ಹೆತ್ತವರನ್ನು ನೀವು ಪ್ರೀತಿಸುವ ರೀತಿಯಲ್ಲಿ ನೀವು ಅವರನ್ನು ಪ್ರೀತಿಸಲು ಸಾಧ್ಯವಿಲ್ಲ.

ನೀವು ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತೀರಿ ಆದರೆ ಆ ಪ್ರೀತಿಯು ನಿಮ್ಮ ನೆರೆಹೊರೆಯವರನ್ನು ಪ್ರೀತಿಸುವ ರೀತಿಯದ್ದಲ್ಲ.

ನೀವು ದೇವರಿಗೆ ಶರಣಾಗಿರುವಿರಿ, ಆದ ಕಾರಣ ಇಡೀ ಜೀವನ ದೇವರ ಮಾರ್ಗದರ್ಶನದಂತೆ ನಡೆಸಬೇಕು.

ದೇವರು ಯಾರಿಂದಲೂ ಬದಲಾಗಲಾರ.

ನೀವು ಪ್ರಾಣಿಗಳನ್ನು ಪ್ರೀತಿಸುವಿರಿ, ಈ ಪ್ರೀತಿಯು ನಿಮ್ಮ ಮಗುವಿಗೆ ತೋರುವ ಪ್ರೀತಿಗೆ ಸಮವಲ್ಲ.

ನೀವು ಹೂವು ಪಕ್ಷಿಗಳ, ಆಕಾಶ ಸಾಗರಗಳು, ಸೂರ್ಯ-ಚಂದ್ರ ಪರ್ವತ ಇತ್ಯಾದಿಗಳ ಸೌಂದರ್ಯವನ್ನು ಹಾಡಿ ಹೊಗಳುವಿರಿ  ಇವೆಲ್ಲವು ನಾವು ದೇವರೆಂದು ನಂಬುವ ಒಬ್ಬ ಶ್ರೇಷ್ಠ ಶೃಷ್ಟಿಕರ್ತನ ಇರುವಿಕೆಯನ್ನು ದೃಷ್ಟಾಂತಿಸುತ್ತವೆ.

ಸುತ್ತುವ ಮತ್ತು ತಿರುಗುವ ಗ್ರಹಗಳು, ಗೆಲಾಕ್ಸಿಗಳು ಮತ್ತು ದೈತ್ಯಾಕಾರದ ಬ್ರಹ್ಮಾಂಡವು ನಮ್ಮ ಸೃಷ್ಟಿಕರ್ತನ ಶ್ರೇಷ್ಠತೆಯನ್ನು ವ್ಯಕ್ತಪಡಿಸುತ್ತದೆ.
ಹಾಗಾದರೆ - ಯಾರು ನೈಜ ಮೆಚ್ಚುಗೆ ಮತ್ತು ಪೂಜೆಗೆ ಅರ್ಹರು?
ಖಂಡಿತವಾಗಿಯೂ ಸೂರ್ಯ, ಚಂದ್ರ, ನಕ್ಷತ್ರಗಳೆಲ್ಲವೂ ಸೃಷ್ಟಿಗಳಾಗಿವೆ ಆದರೆ ಅವುಗಳ ಸೃಷ್ಟಿಕರ್ತನೇ ನಮ್ಮ ಸೃಷ್ಟಿಕರ್ತನಾಗಿದ್ದಾನೆ.

ನಾವು ದೇವರನ್ನು ಆರಾಧಿಸಬೇಕು ಮತ್ತು ಅವನನ್ನು ಅತಿಯಾಗಿ ಪ್ರೀತಿಸಬೇಕು ಏಕೆಂದರೆ, ಅವನೇ ನಮಗೆ ತಾಯಿ, ತಂದೆ, ಸಂಗಾತಿಯನ್ನು ನೀಡಿದವ ಹಾಗೆಯೇ, ನಾವು ಜೀವಿಸುವ ಪರಿಸರದಲ್ಲಿ ಹೂವು-ಹಣ್ಣು, ಪ್ರಾಣಿ-ಪಕ್ಷಿ, ಸೂರ್ಯ-ಚಂದ್ರ, ನಕ್ಷತ್ರ ಇತ್ಯಾದಿಗಳನ್ನು ಇರಿಸಿದವ.

ನಾವು ತೆಗೆದುಕೊಳ್ಳುವ ಪ್ರತಿಯೊಂದು ಉಸಿರು ದೇವರಿಂದಲೇ..ನೀವು
ನಿಮ್ಮ ಪೋಷಕರನ್ನು ಮತ್ತು ನಿಮ್ಮಸುತ್ತಲು ಕಾಣಸಿಗುವ ಪರಿಸರವನ್ನು ಮೆಚ್ಚುವಾಗ ಇವೆಲ್ಲವನ್ನು ಸೃಷ್ಟಿಸಿದ ಮತ್ತು ನಮ್ಮೆಲ್ಲರ ಸಂತೋಷಗಳಿಗೆ ನೈಜ ಕಾರಣವಾದ  "ನಮ್ಮ ಪ್ರಭು" ವನ್ನು ಒಪ್ಪದಿರುವುದು ನ್ಯಾಯಸಮ್ಮತವಲ್ಲ.

ಸಮತೋಲನ ಕ್ರಿಯೆಯೆಂದರೆ  ಸೂರ್ಯ-ಚಂದ್ರ, ಹೂವು-ಹಣ್ಣು ಹೀಗೆ ಮಿಕ್ಕೆಲ್ಲಾ ಸೃಷ್ಟಿಗಳನ್ನು ಮೆಚ್ಚುವುದು, ಆದರೆ ಏಕೈಕ ಶೃಷ್ಟಿಕರ್ತ ಸರ್ವಶಕ್ತ ದೇವರನ್ನು ಮಾತ್ರ ಆರಾಧಿಸುವುದು.

Thursday, 21 May 2020

ಸನಾತನ ಧರ್ಮ ಮತ್ತು ಹಲಾಲ್ ಆಹಾರವನ್ನು ತಿನ್ನುವ ಆಜ್ಞೆ

ಸನಾತನ ಧರ್ಮದಲ್ಲಿ ಹಲಾಲ್ ಆಹಾರ

ಖುರ್ಷಿದ್ ಇಮಾಮ್
*******************************

ಅರೇಬಿಕ್ ಪದ 'ಹಲಾಲ್' ಎಂದರೆ ಅನುಮತಿಸಲಾದ.

ಕುರಾನ್ ಈ ಪದವನ್ನು ಭಿನ್ನ ಸನ್ನಿವೇಶಗಳಲ್ಲಿ ಬಳಸುತ್ತದೆ. ಅಂತಹ ಒಂದು ಸಂದರ್ಭವೆಂದರೆ: ಆಹಾರ.

ದೇವರು ಇಡೀ ವಿಶ್ವವನ್ನು ಮಾನವಕುಲದ ಹಿತಕ್ಕಾಗಿ ಸೃಷ್ಟಿಸಿದ್ದಾನೆ. ಪ್ರಾಣಿ ಮತ್ತು ಸಸ್ಯ ಸಂಕುಲವು ಸಹ ನಮ್ಮ ಸೇವೆಯಲ್ಲಿದೆ. ಕೆಲವು ಪ್ರಾಣಿಗಳನ್ನು  ಆಹಾರವನ್ನಾಗಿ ತಿನ್ನಲು ದೇವರಿಂದ ಅನುಮತಿ ದೊರೆತಿದೆ. ಆಹಾರವನ್ನು ತಿನ್ನುವ ಈ ಅನುಮತಿ ಇಸ್ಲಾಮಿಕ್ ಮತ್ತು ಹಿಂದೂ ಧಾರ್ಮಿಕ ಗ್ರಂಥಗಳೆರಡರಲ್ಲೂ ಇದೆ.

 ಹಿಂಸಾತ್ಮಕವಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ. ಆದರೆ ಆಹಾರವಾಗಿ ಸೇವಿಸಲು, ದೇವರ ಅನುಮತಿ ಇದೆ. ಆದ್ದರಿಂದ, ಈ ಪ್ರಾಣಿಗಳನ್ನು ವಧಿಸುವಾಗ ನಾವು ದೇವರ ಹೆಸರನ್ನು ತೆಗೆದುಕೊಳ್ಳುತ್ತೇವೆ. ಇಲ್ಲದಿದ್ದರೆ ಜೀವವನ್ನು ತೆಗೆಯುವುದು ನಮ್ಮ ಕೈಯಲ್ಲಿದೆ ಎಂದು ನಾವು ಭಾವಿಸುತ್ತೇವೆ.

ಜೀವವನ್ನು ತೆಗೆಯುವುದು ಖಂಡಿತವಾಗಿಯೂ ತಪ್ಪಾಗಿದ್ದರೂ, ದೇವರ ಅನುಮತಿಯಿಂದ ಅದನ್ನು ಕೇವಲ ಆಹಾರ ರೂಪದಲ್ಲಿ ಸೇವಿಸುವ ಉದ್ದೇಶದಿಂದ ನಾವು ಈ ಜೀವವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು  ನೆನಪಿಸಿಕೊಳ್ಳುತ್ತೇವೆ. ನಿಜಕ್ಕೂ ದೇವರು ಎಲ್ಲಾ ಜೀವಿಗಳ ಮೇಲೆ ಶಕ್ತಿಯುಳ್ಳವನಾಗಿದ್ದು ,ಈ ಪ್ರಾಣಿಗಳ ಮೇಲೆ ನಮಗೇನೂ ಅಧಿಕಾರವಿಲ್ಲ. ಈ "ಅವಕಾಶ"ಅಥವಾ ಅನುಮತಿಸುವಿಕೆಯನ್ನೇ ಅರೇಬಿಕ್ ಭಾಷೆಯಲ್ಲಿ ಹಲಾಲ್ ಎಂದು ಕರೆಯಲಾಗುತ್ತದೆ.

ನೀವು ಹಿಂದೂ ಧರ್ಮಗ್ರಂಥಗಳನ್ನು ಓದಿದರೆ, ಹಲವಾರು ಸ್ಥಳಗಳಲ್ಲಿ ಮಾಂಸವನ್ನು ತಿನ್ನುವ ಆಜ್ಞೆ ಇದೆ.

ಶ್ರೀ ರಾಮಚಂದ್ರರು ಕೂಡ ಮಾಂಸ ತಿನ್ನುತ್ತಿದ್ದರು.

 ಭಾರತೀಯ ಶ್ರೇಷ್ಠ ವ್ಯಕ್ತಿ- ಸ್ವಾಮಿ ವಿವೇಕಾನಂದರು- ಹಿಂದೂ ಸಹೋದರರಿಗೆ ಮಾಂಸ ತಿನ್ನುವ ಅಗತ್ಯವನ್ನು ಒತ್ತಿ ಹೇಳಿದರು.

"ಹಳೆಯ ವಿಧ್ಯುಕ್ತಗಳ ಪ್ರಕಾರ,  ಗೋಮಾಂಸವನ್ನು ತಿನ್ನದವನು ಉತ್ತಮ ಹಿಂದೂ ಅಲ್ಲ ಎಂದು ನಾನು ನಿಮಗೆ ಹೇಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಕೆಲವು ಸಂದರ್ಭಗಳಲ್ಲಿ ಓರ್ವನು ಗೂಳಿಯನ್ನು ಬಲಿ ಕೊಟ್ಟು ತಿನ್ನಬೇಕು."
[ಸ್ವಾಮಿ ವಿವೇಕಾನಂದರ ಸಂಪೂರ್ಣ ಕೃತಿಗಳು, ಸಂಪುಟ 3, ಪುಟ 536]

"ನಮ್ಮ ಭಾರತದಲ್ಲೇ ಒಂದು ಸಮಯವಿತ್ತು ಗೋಮಾಂಸವನ್ನು ತಿನ್ನದೇ, ಯಾವ ಬ್ರಾಹ್ಮಣನು ಬ್ರಾಹ್ಮಣನಾಗಿ ಉಳಿಯಲು ಸಾಧ್ಯವಿರಲಿಲ್ಲ;" [ಪುಟ 174]

ಇವು ಪ್ರಸಿದ್ಧ ವಿಷಯಗಳು. ಆಶ್ಚರ್ಯಕರ ಸಂಗತಿಯೆಂದರೆ, ಸನಾತನ ಧರ್ಮವು ಸಹ ಹಲಾಲ್ ಆಹಾರವನ್ನು ತಿನ್ನಲು ಆಜ್ಞಾಪಿಸುತ್ತದೆ.  ನಿಗದಿತ ವಿಧಾನವನ್ನು ಅನುಸರಿಸದೇ ಮಾಂಸ ತಿನ್ನುವುದನ್ನು ಹಿಂದೂ ಧರ್ಮದಲ್ಲಿ ನಿಷೇಧಿಸಲಾಗಿದೆ.

ಹಿಂದೂ ಧರ್ಮಗ್ರಂಥದಲ್ಲಿ ಪ್ರಾಣಿ ವಧೆಗಾಗಿ ಎರಡು ಷರತ್ತುಗಳನ್ನು ಹಾಕಲಾಯಿತು.
1. ದೇವರ  ಅನುಮತಿಯೊಂದಿಗೆ ವಧೆ ಮಾಡಲಾಗುತ್ತಿದೆ ಎಂಬುದನ್ನು ನೆನಪಿನಲ್ಲಿಡುವ ಸಲುವಾಗಿ  ವಧೆಯ ಸಮಯದಲ್ಲಿ ದೇವರ ಹೆಸರನ್ನು ತೆಗೆದುಕೊಳ್ಳಬೇಕು
2. ದೇವರು ಕೊಟ್ಟ ವಿಧಾನವನ್ನು ಅನುಸರಿಸಬೇಕು. ಇಲ್ಲದಿದ್ದರೆ, ಇದನ್ನು ಕೊಲೆ ಎಂದು ಪರಿಗಣಿಸಲಾಗುವುದು.

ಮಂತ್ರಗಳನ್ನು ಪಠಿಸುವುದರಿಂದ ಮಾಂಸವನ್ನು ಪವಿತ್ರ ಅಥವಾ ಶುದ್ಧಗೊಳಿಸಲಾಗುತ್ತದೆ.




ಮನುಸ್ಮೃತಿಯ ಈ  ಮೇಲಿನ ಪದ್ಯಗಳು ಪ್ರಾಣಿಗಳನ್ನು ದೈವಿಕ ಕಾನೂನಿನ ಪ್ರಕಾರ ವಧಿಸುವ ಮತ್ತು ದೈವಿಕ ಮಂತ್ರವನ್ನು ಪಠಿಸುವ ಬಗ್ಗೆ ಸ್ಪಷ್ಟನೆ ನೀಡುತ್ತವೆ.

ನಮ್ಮನ್ನು ಮತ್ತು ಪ್ರಾಣಿಗಳನ್ನು ಸೃಷ್ಟಿಸಿದ ದೇವರು,ಅವುಗಳಲ್ಲಿ ಕೆಲವನ್ನು ನಮ್ಮ ಆಹಾರವಾಗಿ ಬಳಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾನೆ.

ಸಜೀವಿಗಳನ್ನು ಸೇವಿಸದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯ - ಸಸ್ಯಾಹಾರಿ ಅಥವಾ  ಮಾಂಸಾಹಾರಿ ಆಗಲಿ - ಇತರ ಜೀವಿಗಳನ್ನು ತಿನ್ನುವುದರ ಮೂಲಕವೇ ಬದುಕುಳಿಯುತ್ತಾನೆ.

English Source: https://khurshidimam.blogspot.com/2020/05/halal-food-in-sanatan-dharm.html

Friday, 10 April 2020

ಹಿಂದೂ ಸಹೋದರನ ಪ್ರಶ್ನೆ

ಪ್ರಶ್ನೆ: ಮಹಮ್ಮದ್ ಅಲ್ಲಾಹನ ಪ್ರವಾದಿಗಳು.  ಅವರ ಒಡನಾಡಿಗಳು ಅವಿಶ್ವಾಸಿಗಳ ವಿರುದ್ಧ ಕಠಿಣರೂ,  ಒಬ್ಬರಿಗೊಬ್ಬರು ಕರುಣಾಮಯಿಗಳೂ ಆಗಿದ್ದಾರೆ...”(ಖುರಾನ್ 48:29)

ಖುರಾನಿನ ಈ ಸೂಕ್ತದ ಸನ್ನಿವೇಶವಾದರು ಏನು  [ಇದು ದ್ವೇಷವನ್ನು ಹರಡುತ್ತಿದೆಯೇ?] -ಈ ಕುರಿತು ಹಿಂದೂ ಸಹೋದರನು ತಿಳಿಯಲು ಬಯಸುತ್ತಾನೆ.

* ಒಂದು ಸಾಲಿನ ಉತ್ತರವೆಂದರೆ *: - ಪ್ರವಾದಿ ಹಾಗೂ ಅವರ ಅನುಯಾಯಿಗಳು ತಮ್ಮನ್ನು ಭಯಭೀತಿಗೊಳಿಸಿ ತಾಯ್ನಾಡಿನಿಂದ ಹೊರದೂಡಿದವರ ವಿರುದ್ಧ ಧೃಡ/ಕಠಿಣವಾಗಿರುವುದರ ಬಗ್ಗೆ  ಈ ಸೂಕ್ತ ತಿಳಿಸುತ್ತದೆ.

* ವಿವರಾತ್ಮಕ ಉತ್ತರಕ್ಕಾಗಿ, ದಯವಿಟ್ಟು ಕೆಳಗೆ ಓದಿ *

 ಕೆಲವು ಹೇಳಿಕೆಗಳನ್ನು ಸಂದರ್ಭ/ಸನ್ನಿವೇಶಕ್ಕೆ ಅನುಗುಣವಾಗಿ ಪ್ರಸ್ತುತಪಡಿಸದೆ ಋಣಾತ್ಮಕ ಚಿತ್ರಣವನ್ನು ಬಿಂಬಿಸುವ ಅಂಶವನ್ನು ಕೆಳಗೆ  ವಿವರಿಸಲಾಗಿದೆ.

ಉದಾಹರಣೆಗೆ: ಕರೋನಾ-ವೈರಸ್ ನ ಈ ಸಮಯದಲ್ಲಿ, ಮಿಸ್ಟರ್ 'X' ಮಿಸ್ಟರ್ 'Y' ಗೆ ಹೇಳಿದ, "ನೀವು ಹೊರಗೆ ಹೋಗುವುದನ್ನು ತಪ್ಪಿಸಿ,ನೀವು ಭೇಟಿಯಾಗುವ  ಪ್ರತಿಯೊಬ್ಬರಿಂದ 1 ಮೀಟರ್ ದೂರ ಕಾಯ್ದುಕೊಳ್ಳಿ ಮತ್ತು ಯಾರೊಂದಿಗೂ ಕೈಕುಲುಕಬೇಡಿ".

ಮಿಸ್ಟರ್‌ X ನ ಈ ಮಾತುಗಳು ನನಗೆ ಅರ್ಥವಾಗುತ್ತವೆ, ಏಕೆಂದರೆ ಕರೋನಾ-ವೈರಸ್ ಮಾರಿ ಹರಡುತ್ತಿರುವ ಅರಿವು ನನಗಿದೆ.ಇದು ಜೀವಕ್ಕೆ ಅಪಾಯಕಾರಿ.ಹೀಗಿರುವಾಗ ಜನರೊಂದಿಗಿನ ನಿಕಟ ಸಂಪರ್ಕಕವು ಕರೋನ-ವೈರಸ್ ಸೋಂಕು ಹಾಗೂ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.

ಆದರೆ, ಯಾರಾದರೂ ಈ ಸಂದರ್ಭವನ್ನು ನಿರ್ಲಕ್ಷಿಸಿ - "ಮಿಸ್ಟರ್ X  ದ್ವೇಷ ಮತ್ತು ಕ್ರೌರ್ಯವನ್ನು ಹರಡುತ್ತಿದ್ದಾರೆ. ಜನರನ್ನು ಬಹಿಷ್ಕರಿಸುವಂತೆ, ಕೈಕುಲುಕದಂತೆ ಅವರು ಮಿಸ್ಟರ್ Yಗೆ  ಸಲಹೆ ನೀಡುತ್ತಿದ್ದಾರೆ " ಎಂದು ವಾದಿಸುವುದಾದರೆ, ಆ ವ್ಯಕ್ತಿ ಮಿಸ್ಟರ್ Xನ ಅಪಪ್ರಚಾರ ಮಾಡಿ ಋಣಾತ್ಮಕ ಚಿತ್ರಣವನ್ನು ಹರಡುತ್ತಿದ್ದಾನೆ ಎಂದಾಯಿತು. ಮಿಸ್ಟರ್ X ಅವರು ಮಿಸ್ಟರ್  Yಗೆ ಈ ಸಲಹೆಯನ್ನು ನೀಡಿದ ಆ ಸಂದರ್ಭವನ್ನು ಈ ವ್ಯಕ್ತಿ ನಿರ್ಲಕ್ಷಿಸುತ್ತಿದ್ದಾನೆ. ಈ ಸಲಹೆ-ಸೂಚನೆಗಳು ಪರಿಸ್ಥಿತಿಗೆ ಅನುಗುಣವಾದುದೇ ಹೊರತು ಜೀವನದಲ್ಲಿ ಅಳವಡಿಸಬೇಕಾದ ಸಾಮಾನ್ಯ ನಿಯಮವೇನಲ್ಲ.

ಅದೇ ರೀತಿ ಕುರಾನ್ ಪ್ರೀತಿ ಮತ್ತು ಬುದ್ಧಿವಂತಿಕೆಯನ್ನು ಜೀವನದಲ್ಲಿ ಸಾಮಾನ್ಯ ನಿಯಮವನ್ನಾಗಿ ಬಳಸುವಂತೆ ಸಲಹೆ  ನೀಡುತ್ತದೆ. ಆದಾಗ್ಯೂ, ಯುದ್ಧದ ಸಮಯಕ್ಕಾಗಿ ಮತ್ತೊಂದು ರೀತಿಯ ನಿಯಮಾವಳಿಗಳನ್ನು ಪ್ರಸ್ತಾಪಿಸುತ್ತದೆ. ನೀವು ಖುರಾನ್ ಅನ್ನು ಪ್ರಾರಂಭದಿಂದ( ಫತೇಹ್ ಅಧ್ಯಾಯ)  ಓದದ್ದೇ ಆದ್ದಲ್ಲಿ ಸೂಕ್ತಗಳ ಕುರಿತು ಉದ್ಭವವಾಗುವ ಪ್ರಶ್ನೆಗಳಿಗೆ ಸಂಪೂರ್ಣ ಚಿತ್ರಣ ಸಿಗುತ್ತದೆ.

1.ಮೆಕ್ಕಾದ ಜನರು ಮುಸ್ಲಿಮರನ್ನು ತಮ್ಮ ತಾಯ್ನಾಡಿನಿಂದ ಹೊರಹಾಕಿದ್ದರು. ಮುಸ್ಲಿಮರ  ಆಸ್ತಿ-ಪಾಸ್ತಿ, ಹಣ-ಸಂಪತ್ತನ್ನು ಈ ಜನರು ಕಸಿದುಕೊಂಡರು. ಮುಸ್ಲಿಮರನ್ನು ಕೊಲ್ಲುವುದರ ಜೊತೆಗೆ ಅವರನ್ನು ವಲಸಿಗರನ್ನಾಗಿ ಮಾಡಿದರು.

ಮುಸ್ಲಿಮರು ಮೆಕ್ಕಾಗೆ ಹಿಂತಿರುಗಲು ನಿರ್ಧರಿಸಿ ಬಂದಾಗ, ಆ ಪ್ರದೇಶದಲ್ಲಿ ನುಸುಳಲು ಸಹ ಅವರಿಗೆ ಅವಕಾಶ ನೀಡಲಿಲ್ಲ.ಈ ಸಂಧರ್ಭದಲ್ಲಿ ಮೆಕ್ಕನ್ನರ ಮತ್ತು ಮುಸ್ಲಿಮರ ನಡುವೆ ಒಪ್ಪಂದವಾಯಿತು.

2.ಈ ಅಧ್ಯಾಯದ ಸೂಕ್ತಗಳು ಮೇಲೆ ವಿವರಿಸಿದ ಸಂಧರ್ಭದಲ್ಲಿ ಬಹಿರಂಗವಾದವು/ನಿರೂಪಿತವಾದವು.

3.ಬಹುಮುಖ್ಯ ಭಾಗವೆಂದರೆ: * ಮುಸ್ಲಿಮರು ಮೆಕ್ಕನ್ನರಿಗಿಂತ ಬಲಶಾಲಿಗಳಾಗಿದ್ದರೂ, ಅವರು ಶಾಂತಿಗೆ ಅನುವು ನೀಡುವ ಉದ್ದೇಶದಿಂದ ಮೆಕ್ಕನ್ನರೊಂದಿಗೆ ಒಪ್ಪಂದ ಮಾಡಿಕೊಂಡರು *.

22ನೇ ಸೂಕ್ತದಿಂದ ಓದುವುದಾದರೆ

4.ಸೂಕ್ತ 22 ಹೇಳುತ್ತದೆ- "ಮತ್ತು ನಂಬಿಕೆಯಿಲ್ಲದವರು [ಮೆಕ್ಕನ್ನರು] ನಿಮ್ಮೊಂದಿಗೆ ಯುದ್ಧ ನೆಡೆಸುತ್ತಿದ್ದರೆ, ಅವರು ಬೆನ್ನು ತಿರುಗಿಸಿ ಓಡಿಹೋಗುತ್ತಿದರು"

5. 25ನೇ ಸೂಕ್ತವು  ಮೆಕ್ಕಾದ ಜನತೆ ಮುಸ್ಲಿಮರನ್ನು ಹರಮ್ ಮಸೀದಿಗೆ ಹೋಗದಂತೆ ತಡೆದದ್ದನ್ನು ವಿವರಿಸುತ್ತದೆ.

ಖುರಾನ್ ಮುಸ್ಲಿಮರ ವಿರುದ್ಧ ಹೊಡೆದಾಡಿ , ಅವರನ್ನು ನಾಡಿನಿಂದ ನಿಷ್ಕಾಶಗೊಳಿಸಿ, ಅವರ ಮೇಲೆ ಎಲ್ಲಾ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ಬಿಚ್ಚಿಟ್ಟ ನಿರ್ದಿಷ್ಟ ಗುಂಪಿನ ಕುರಿತು ಮಾತನಾಡುತ್ತಿದೆ.  ಮುಸ್ಲಿಮರು  ವರ್ಷಾನುಗಟ್ಟಲೆ ತಾಳ್ಮೆಯಿಂದಿದ್ದು, ತಮ್ಮ ತಾಯ್ನಾಡಿಗೆ ಮರಳಲು ಅದೆಷ್ಟು ಬಯಸಿದ್ದರೂ ಸಹ ಮತ್ತೆ-ಮತ್ತೆ ಈ ಮೆಕ್ಕನ್ನರ ಗುಂಪು ಅವರನ್ನು ತಡೆದು ನಿಲ್ಲಿಸಿತ್ತು*.


ಆ ಮುಸ್ಲಿಮರ ನೋವು ಮತ್ತು ತಾಳ್ಮೆಯನ್ನು ನೀವು ಊಹಿಸಬಲ್ಲಿರಾ?

ಈ ರೀತಿಯ ಜನರ ಕುರಿತಾಗಿ, 29ನೇಯ ಸೂಕ್ತವು  ಪ್ರವಾದಿ ಮತ್ತು ವಿಶ್ವಾಸಿಗಳು ಇಂತಹ ಜನರ ವಿರುದ್ಧ [ ಯುದ್ಧದಲ್ಲಿದ್ದ ಮೆಕ್ಕನ್ನರು]  ದೃಢರಾಗಿದ್ದಾರೆಂದು  ಹೇಳುತ್ತದೆ.

ಇದನ್ನು ಅರಿಯಲು ಕಠಿಣವಿರುವುದಾದರು ಏನು?

ಒಂದು ದೇಶದ ಸೈನ್ಯವು ತಾನು ಹೊರಹಾಕಲ್ಪಟ್ಟ ಭೂಮಿಯನ್ನು  ಮರುಪಡೆಯಲು ಹೋದಾಗ ಮಾಡುವುದಾದರೂ ಏನು?

ಲೇಖನದ ಮೂಲ:
https://khurshidimam.blogspot.com/2020/04/strong-against-kaafir-quran-4829-what.html

ಧರ್ಮಗ್ರಂಥಗಳಲ್ಲಿ ಹಿಂಸೆಯ ಸಂಧರ್ಭ: ತತ್ವಜ್ಞಾನ ಮತ್ತು ಸತ್ಯದ ಪರಿಶೀಲನೆ

ಶುಕ್ರವಾರ, ಏಪ್ರಿಲ್ 25, 2025 ದುಃಖದ ಘಟನೆ ಮತ್ತು ಅಪ್ರಮಾಣಿತ ಆರೋಪ ದುಃಖದ ಘಟನೆ ಮತ್ತು ಅಪ್ರಮಾಣಿತ ಆರೋಪ ಖುರ್ಷೀದ್ ಇಮಾಮ್ ---------------------------------...